ಅರಸೀಕೆರೆ: ನಗರದ ಕೆ ಎಸ್ ಆರ್ ಟಿ ಸಿ ಡಿಪೋ ಹಿಂಭಾಗದ ಅರುಣ್ ಕುಮಾರ್ ಲೇಔಟ್ ಬಡಾವಣೆಯಲ್ಲಿ ವಿದ್ಯುತ್ ಟ್ರಾನ್ಸ್ಫರ್ಮರ್ ಬಳಿ ಹಸು ಮೇಯಲು ಹೋದಾಗ ವಿದ್ಯುತ್ ಅವಘಡದಿಂದ ಸಾವನ್ನಪ್ಪಿದೆ.
ಬಡಾವಣೆಯ ನಾಗರಿಕರು ಚಾಮುಂಡೇಶ್ವರಿ ವಿದ್ಯುತ್ ನಿಗಮದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಂಜುನಾಥ್ ಮತ್ತು ಸಿಬ್ಬಂದಿಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಟ್ರಾನ್ಸ್ಫರ್ ಬಳಿ ಪದೇ ಪದೇ ಈ ರೀತಿ ಆಗುತ್ತಿದೆ, ಅಕ್ಕ ಪಕ್ಕದ ಮನೆಗಳ ಫ್ಯೂಸ್ ಹೋಗುತ್ತಿದೆ, ವಿದ್ಯುತ್ ನಿಗಮದ ಸಿಬ್ಬಂದಿಗಳು ತಾತ್ಸರ ತೋರುತ್ತಿದ್ದಾರೆ ಇದನ್ನು ಕೂಡಲೇ ಬಗೆಹರಿಸಬೇಕೆಂದು ನಾಗರಿಕರು ಒತ್ತಾಯಿಸಿದರು.
ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಂಜುನಾಥ್ ರವರು ಮಾತನಾಡಿ ಮೃತಪಟ್ಟಿರುವ ಹಸುವಿನ ಅವಲಂಬಿತ ಕುಟುಂಬಕ್ಕೆ ಪರಿಹಾರ ಕೊಡಿಸಲು ಸರ್ಕಾರಕ್ಕೆ ವರದಿ ನೀಡುತ್ತೇನೆಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!