filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; motionR: null; delta:null; bokeh:0; module: photo;hw-remosaic: false;touch: (-1.0, -1.0);sceneMode: 2097152;cct_value: 0;AI_Scene: (-1, -1);aec_lux: 399.0;aec_lux_index: 0;albedo: ;confidence: ;motionLevel: 0;weatherinfo: weather?null, icon:null, weatherInfo:100;temperature: 34;

ಅರಸೀಕೆರೆ ನಗರದ ಹಿರಿಮೆಯನ್ನು ಹೆಚ್ಚಿಸಿದ ಸ್ವಾಗತ ಕಮಾನು

ಅರಸೀಕೆರೆ: ನಗರಸಭೆಯ ವತಿಯಿಂದ ಕಳೆದ ಹಲವಾರು ದಿನಗಳಿಂದಲೂ ನಿರಂತರವಾಗಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಲ್ಲಿ ಮತ್ತು ನಗರದ ಅಂದವನ್ನು ಹೆಚ್ಚಿಸುತ್ತಿರುವ ಕೆಲವು ಕಾರ್ಯಗಳಲ್ಲಿ ಅರಸೀಕೆರೆ ನಗರಕ್ಕೆ ಸೇರುವ ಮತ್ತು ಅರಸೀಕೆರೆ ನಗರದಿಂದ ಬೆಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ಹುಳಿಯಾರು ಕಡೆ ತೆರಳಲ್ಲಿರುವ ಪ್ರಯಾಣಿಕರಿಗೆ ಶುಭ ಹಾರೈಸಿ ನಗರದ ಮತ್ತು ಅರಸೀಕೆರೆ ತಾಲೂಕಿನ ಇತಿಹಾಸ ಮತ್ತು ಧಾರ್ಮಿಕ ಆಧ್ಯಾತ್ಮಿಕ ಶಕ್ತಿಕೇಂದ್ರಗಳ ಬಗ್ಗೆ ತಿಳಿಸಲಿರುವ ಸ್ವಾಗತ ಕಮಾನುಗಳನ್ನು ಅರಸೀಕೆರೆ ನಗರಸಭೆ ವತಿಯಿಂದ ನಿರ್ಮಾಣ ಮಾಡುತ್ತಿದ್ದು, ಪ್ರಪ್ರಥಮವಾಗಿ ಅರಸೀಕೆರೆ ಕಡೆಯಿಂದ ಶಿವಮೊಗ್ಗಕ್ಕೆ ತೆರಳಲ್ಲಿರುವ ರಸ್ತೆಯಲ್ಲಿ ಸ್ವಾಗತ ಕಮಾನು ಬೋರ್ಡನ್ನು ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಕೆ ಪಿ ಎಸ್ ಕಾಲೇಜು ಬಳಿ ಅರಸಿಕೆರೆ ನಗರಸಭೆಯಿಂದ ಹಾಕಲಾಯಿತು. ಅರಸೀಕೆರೆ ಕಡೆಯಿಂದ ಶಿವಮೊಗ್ಗಕ್ಕೆ ತೆರಳಲ್ಲಿರುವ ಪ್ರಯಾಣಿಕರಿಗೆ ಚಿಕ್ಕಮಂಗಳೂರು ಜಿಲ್ಲೆಯ ಕಡೂರು ತಾಲೂಕು ಬಾಣವರ ಬಳಿ ಇರುವ ಪ್ರಖ್ಯಾತ ಶ್ರೀ ಹೇಮಗಿರಿ ಮಲ್ಲಿಕಾರ್ಜುನ ಸ್ವಾಮಿಯ ಸನ್ನಿಧಿಗೆ ಸ್ವಾಗತ ಮತ್ತು ಶ್ರೀ ಬಯಲು ಬಸವೇಶ್ವರ ಸ್ವಾಮಿಯ ಸನ್ನಿಧಿಗೆ ಸ್ವಾಗತ ಮತ್ತು ಶಿವಮೊಗ್ಗ ಕಡೆಯಿಂದ ಅರಸೀಕೆರೆಗೆ ಬರುವ ಪ್ರಯಾಣಿಕರಿಗೆ ರಾಜ್ಯದ ಪ್ರಖ್ಯಾತ ಚಿಕ್ಕ ತಿರುಪತಿ ಎಂದು ಹೆಸರುವಾಸಿಯಾಗಿರುವ ಶ್ರೀ ಅಮರಗಿರಿ ಮಾಲೆಕಲ್ಲು ತಿರುಪತಿ ತಿಮ್ಮಪ್ಪನ ಸನ್ನಿಧಿಯ ಅರಸೀಕೆರೆ ನಗರಕ್ಕೆ ಸ್ವಾಗತ ಮತ್ತು ಚಿಕ್ಕ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಸ್ವಾಗತ ಎಂಬ ಸ್ವಾಗತ ಕಮಾನು ಗಮನಿಸಿದ ಅರಸಿಕೆರೆ ನಗರದ ನಾಗರಿಕರು ಮತ್ತು ಪ್ರಯಾಣಿಕರು ಅರಸೀಕೆರೆ ನಗರಸಭೆಯ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೆಲಕಾಲ ತಮ್ಮ ತಮ್ಮ ವಾಹನಗಳನ್ನು ನಿಲ್ಲಿಸಿ ಸ್ವಾಗತ ಕಮಾನು ನೋಡಿ ನಗರದ ಇತಿಹಾಸದ ಬಗ್ಗೆ ಮೆಲುಕು ಹಾಕುತ್ತಾ ಸಾಗಿದರು.

Leave a Reply

Your email address will not be published. Required fields are marked *

error: Content is protected !!